ನಿಮ್ಮ ಮಾರ್ಗದರ್ಶಕರು
ಎಂ. ಗೋಪಾಲಕೃಷ್ಣ ಭಟ್
Stress & Mind Expert · Life Transformation Guide
ಬಾಲ್ಯದಿಂದಲೇ ಧ್ಯಾನ ಮತ್ತು ಆಂತರಿಕ ಬೆಳವಣಿಗೆಯ ಬಗ್ಗೆ ಆಸಕ್ತಿ ಹೊಂದಿರುವ
ಗೋಪಾಲಕೃಷ್ಣ ಭಟ್ ಅವರು 13ನೇ ವಯಸ್ಸಿನಿಂದ ಧ್ಯಾನಾಭ್ಯಾಸ ಮಾಡುತ್ತಿದ್ದಾರೆ.
1996ರಿಂದ Siddha Samadhi Yoga ಶಿಕ್ಷಕರಾಗಿ ಜನರಿಗೆ ಧ್ಯಾನ,
ಯೋಗನಿದ್ರೆ ಮತ್ತು ಜೀವನ ಪರಿವರ್ತನೆಯ ಮಾರ್ಗದರ್ಶನ ನೀಡುತ್ತಿದ್ದಾರೆ.
ಸಂಸ್ಕೃತದಲ್ಲಿ M.A. ಹಾಗೂ Psychological Counsellingನಲ್ಲಿ
PG Diploma ಪಡೆದಿರುವ ಅವರು, ಮಾನಸಿಕ ಪುನರ್ವಸತಿ ಕ್ಷೇತ್ರದಲ್ಲಿಯೂ
ಸುಮಾರು 18 ವರ್ಷಗಳ ಅನುಭವ ಹೊಂದಿದ್ದಾರೆ.
Sarvasamriddhi Yoganidra Parivara ಮೂಲಕ ಯೋಗನಿದ್ರೆಯನ್ನು
ಸರಳವಾಗಿ ಅರ್ಥಮಾಡಿಕೊಂಡು ನಿಯಮಿತವಾಗಿ ಅಭ್ಯಾಸ ಮಾಡಲು ಜನರಿಗೆ
ಮಾರ್ಗದರ್ಶನ ನೀಡುತ್ತಿದ್ದಾರೆ.
ಈ 2 ಗಂಟೆಗಳ Live Workshop ಮೊದಲ ಅನುಭವ ಮತ್ತು ಸರಿಯಾದ ದಿಕ್ಕನ್ನು
ನೀಡುತ್ತದೆ. ಇನ್ನಷ್ಟು ನಿಯಮಿತವಾಗಿ ಮತ್ತು ಬದ್ಧತೆಯಿಂದ ಅಭ್ಯಾಸ ಮಾಡಲು
ಬಯಸುವವರಿಗೆ 21 ದಿನಗಳ ಮಾರ್ಗದರ್ಶಿತ ಯೋಗನಿದ್ರಾ ಅಭ್ಯಾಸದ ಅವಕಾಶವೂ
ಪ್ರತ್ಯೇಕವಾಗಿ ಲಭ್ಯವಿರುತ್ತದೆ.
“ಗಾಢ ನಿದ್ರೆ ಮತ್ತು ನೆಮ್ಮದಿಗಾಗಿ ಯೋಗನಿದ್ರೆ” ಪುಸ್ತಕದ ಲೇಖಕರು.
“ಮನಸ್ಸನ್ನು ಬಲವಂತವಾಗಿ ನಿಲ್ಲಿಸುವುದು ನಮ್ಮ ಉದ್ದೇಶವಲ್ಲ.
ದೇಹ ಮತ್ತು ಮನಸ್ಸಿಗೆ ಆಳವಾದ ವಿಶ್ರಾಂತಿಯ ಅನುಭವ ನೀಡಿದಾಗ,
ಶಾಂತಿ ಸಹಜವಾಗಿ ಮೂಡಲು ಆರಂಭಿಸುತ್ತದೆ.”